ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 02.09.2020 ರಂದು ಸಂಜೆ 5.00 ಗಂಟೆಯಿಂದ ದಿನಾಂಕ 03.09.2020 ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಹಲ್ಲೆ : 01
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣದ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಿನ್ನಿಕೃಷ್ಣ ಬಿನ್ ರಾಮಚಂದ್ರಯ್ಯ, ಕೊಂಗನಪಲ್ಲಿ ಗ್ರಾಮ, ಕುಪ್ಪಂ ತಾಲ್ಲೂಕು, ಆಂದ್ರಪ್ರದೇಶ ರವರ ಜಮೀನಿನ ಪಕ್ಕದ ಜಮೀನಿನಲ್ಲಿ ಶಫೀವುಲ್ಲಾ ರವರು ದಿನಾಂಕ 02.09.2020 ರಂದು ಮಧ್ಯಾಹ್ನ 3.00 ಗಂಟೆಯಲ್ಲಿ ಜೆ.ಸಿ.ಬಿ ಯಿಂದ ಟ್ರಂಚ್ ಹೊಡೆಸಿ, ದೂರುದಾರರ ಜಮೀನಿನ ಕಡೆ ಜೆ.ಸಿ.ಬಿ ಯನ್ನು ತೆಗೆದುಕೊಂಡು ಬರುತ್ತಿದ್ದಾಗ, ದೂರುದಾರರು ಕೇಳಿದಕ್ಕೆ ಲಿಯಾಕತ್, ಶಫೀವುಲ್ಲಾ ಮತ್ತು ಜಯಿಮ್ ವುಲ್ಲಾ ರವರು ಕೆಟ್ಟಮಾತುಗಳಿಂದ ಬೈದು, ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ.
– ಇತರೆ : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 02.09.2020 ರಂದು ಸಂಜೆ 5.00 ಗಂಟೆಯಲ್ಲಿ ಕ್ಯಾಸಂಬಳ್ಳಿ ಕೃಷಿ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಸಂಚರಿಸುವ ಸ್ಥಳದಲ್ಲಿ ೧) ಮಂಜುನಾಥ, ಪಿಚ್ಚಗುಂಟ್ಲಹಳ್ಳಿ ಗ್ರಾಮ ಮತ್ತು ೨) ವೆಂಕಟೇಶ್, ಬೂಚೆಪಲ್ಲಿ ಗ್ರಾಮ ರವರು ಕುಳಿತುಕೊಂಡು ಮದ್ಯಸೇವನೆ ಮಾಡುತ್ತಿದ್ದವರನ್ನು ಪಿ.ಎಸ್.ಐ. ಶ್ರೀ. ನವೀನ್ ಮತ್ತು ಸಿಬ್ಬಂದಿಯವರು ಹಿಡಿದು, 90 ಎಂ.ಎಲ್.ನ 2 ಓಟಿ ಖಾಲಿ ಪಾಕೇಟ್ ಗಳು ಮತ್ತು 2 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಎರಡು ಖಾಲಿ ವಾಟರ್ ಪ್ಯಾಕೆಟ್ಗಳನ್ನು ವಶಪಡಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.